-->

State news updates

State news updates

Karnataka News Live February 22, 2025 : ಕಂಡಕ್ಟರ್​​ ಮೇಲೆ ಹಲ್ಲೆ ಪ್ರಕರಣ; ಬೆಳಗಾವಿ ಗಡಿಯಲ್ಲಿ ಉದ್ವಿಗ್ನ; ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

ಕಂಡಕ್ಟರ್​​ ಮೇಲೆ ಹಲ್ಲೆ ಪ್ರಕರಣ; ಬೆಳಗಾವಿ ಗಡಿಯಲ್ಲಿ ಉದ್ವಿಗ್ನ; ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ.

ಮೈಸೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ವಸ್ತುಪ್ರದರ್ಶನ ಆವರಣದಲ್ಲಿ‌ ಬೆಂಕಿ, ಡಾಲಿ ಧನಂಜಯ್ ಮದುವೆ ಸೆಟ್ ಪಕ್ಕದಲ್ಲೇ ಘಟನೆ

ಮೈಸೂರು ವಸ್ತು ಪ್ರದರ್ಶನ ಆವರಣದಲ್ಲಿ ಹಾಕಲಾಗಿದ್ದ ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಆವರಣದ ಎರಡು ಮರಗಳು ಕೂಡ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಿಡಿಗೇಡಿ ಕೃತ್ಯ, 35 ಎಕರೆ ಅರಣ್ಯ ನಾಶ, ಚಿರತೆ ಕುಟುಂಬ ಪ್ರಾಣಾಪಾಯದಿಂದ ಪಾರು; ಅರಣ್ಯಾಧಿಕಾರಿ ಮಾಹಿತಿ

<p>ಚಾಮುಂಡಿ ಬೆಟ್ಟ ಬೆಂಕಿ ಅನಾಹುತದಿಂದಾಗಿ 30 -35 ಎಕರೆ ಅರಣ್ಯ ನಾಶವಾಗಿದೆ. ಚಿರತೆ ಕುಟುಂಬ ಒಂದು ಪ್ರಾಣಾಪಾಯದಿಂದ ಪಾರಾಗಿದೆ. ಪ್ರಾಣಿ ಪಕ್ಷಿಗಳು ಸುರಕ್ಷಿತವಾಗಿವೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>

ಮೈಸೂರು: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ; ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಕೋಮು ಸಂಘರ್ಷ ಹೆಚ್ಚಾಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಸಿಟಿ ರವಿ ವಿರುದ್ಧ ದೂರು ದಾಖಲಿಸಲಾಗಿತ್ತು. ಇದೀಗ ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮಹಾಕುಂಭ ಮೇಳಕ್ಕೆ ಹೋಗೋದಕ್ಕಾಗಿಲ್ವ, ಮಿಸ್ ಮಾಡ್ಕೊಂಡ್ರಾ, 1100 ರೂಪಾಯಿ ಕೊಟ್ರೆ ಡಿಜಿಟಲ್ ಸ್ನಾನ ಮಾಡಬಹುದಂತೆ ನೋಡಿ

<p>ಮಹಾಕುಂಭ ಮೇಳಕ್ಕೆ ಹೋಗುವುದು ಸಾಧ್ಯವಾಗದೇ ತೊಂದರೆಗೆ ಒಳಗಾಗಿದ್ದೀರಾ, 1100 ರೂಪಾಯಿ ಕೊಟ್ಟರೆ ಡಿಜಿಟಲ್ ಸ್ನಾನ ಮಾಡಬಹುದಂತೆ!, ಇದಕ್ಕಾಗಿಯೇ ನವೋದ್ಯಮ ಶುರು ಮಾಡಲಾಗಿದೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.&amp;nbsp;</p>

ಕರ್ನಾಟಕ ಸಿಇಟಿ ಪರೀಕ್ಷೆ; ದ್ವಿತೀಯ ಪಿಯು ಪರೀಕ್ಷೆ ನಂತರವೂ ದಾಖಲೆ ಪರಿಶೀಲನೆಗೆ ಅವಕಾಶ ಇದೆ ಎಂದ ಪರೀಕ್ಷಾ ಪ್ರಾಧಿಕಾರ

<p>CET 2025: ಕರ್ನಾಟಕ ಸಿಇಟಿ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ದ್ವಿತೀಯ ಪಿಯುಸಿ ಪರೀಕ್ಷೆ ನಂತರವೂ ತಮ್ಮ ಕಾಲೇಜುಗಳಲ್ಲಿ ಪರಿಶೀಲಿಸಿಕೊಳ್ಳಲು ಅವಕಾಶ ಇದೆ. ಈ ವಿಷಯದಲ್ಲಿ ಆತಂಕಪಡುವ ಅಗತ್ಯ ಇಲ್ಲ. ಸಿಇಟಿ ಪರೀಕ್ಷೆಗೆ ಶುಲ್ಕ ಪಾವತಿಸುವ ಎಲ್ಲ ಅಭ್ಯರ್ಥಿಗಳಿಗೂ ಪ್ರವೇಶ ಪತ್ರವನ್ನು ನೀಡಲಾಗುತ್ತದೆ.</p>

ಮೈಸೂರು ಸಂಸದ ಯದುವೀರ್ -ತ್ರಿಷಿಕಾ ದಂಪತಿಯ ಎರಡನೇ ಮಗನ ನಾಮಕರಣ, ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್‌

<p>ಮೈಸೂರು ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ - ತ್ರಿಷಿಕಾ ದಂಪತಿಯ ಎರಡನೇ ಮಗನ ನಾಮಕರಣ ಫೆ 19 ರಂದು ಅರಮನೆಯಲ್ಲಿ ನೆರವೇರಿದೆ. ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್‌ ಎಂದು ನಾಮಕರಣ ಮಾಡಿದ್ದಾಗಿ ಅರಮನೆ ಮೂಲಗಳು ತಿಳಿಸಿವೆ.</p>

ಬೆಂಗಳೂರು: ಕೋರಮಂಗಲದಲ್ಲಿ ದೆಹಲಿ ಮೂಲದ ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಆರೋಪಿಗಳ ಬಂಧನ

<p>ಬೆಂಗಳೂರು: ಕೋರಮಂಗಲದಲ್ಲಿ ಶುಕ್ರವಾರ ನಸುಕಿನ ವೇಳೆ ದೆಹಲಿ ಮೂಲದ ಮಹಿಳೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಕಳವಳಕಾರಿ ಘಟನೆ ನಡೆದಿದೆ. ಆರೋಪಿಗಳು ಹೊರ ರಾಜ್ಯದವರಾಗಿದ್ದು, ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.</p>

ಉದ್ಯೋಗ ಮಾಹಿತಿ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನಲ್ಲಿ ಉದ್ಯೋಗ, ಫೆಬ್ರವರಿ 25ರೊಳಗೆ ಟಿಸಿಎಸ್‌ ಜಾಬ್ಸ್‌ಗೆ ಅರ್ಜಿ ಸಲ್ಲಿಸಿ

TCS MBA Hiring 2025: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ "ಟಿಸಿಎಸ್‌ ಎಂಬಿಎ ಹೈರಿಂಗ್‌- ಬ್ಯಾಚ್‌ 2025"ಕ್ಕೆ ಅರ್ಹ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಆಸಕ್ತರು ಇದೇ ಫೆಬ್ರವರಿ 25ರ ಮೊದಲು ಅರ್ಜಿ ಸಲ್ಲಿಸಬಹುದು.

Credits : HTimes Kannada

Terms | Privacy | 2024 🇮🇳
–>